ಬಂಟ್ವಾಳ : ತಾಲೂಕು ನೆಟ್ಲಮುಡ್ನೂರು ಗ್ರಾಮದ ನೇರಳಕಟ್ಟೆ ರೈಲ್ವೇ ನಿಲ್ದಾಣದ ಬಳಿ ನೇರಳಕಟ್ಟೆ ರೈಲ್ವೇ ಯಾತ್ರೀ ಸಂಘಕ್ಕೆ ಇತ್ತೀಚೆಗೆ ಚಾಲನೆ ನೀಡಲಾಯಿತು. ನೂತನ ಸಂಘಕ್ಕೆ ಚಾಲನೆ ನೀಡಿ ಮಾತನಾಡಿದ ಮೈಸೂರು ವಿಭಾಗೀಯ ರೈಲ್ವೇ ಸಲಹಾ ಸಮಿತಿ ಅಧ್ಯಕ್ಷ ಸುದರ್ಶನ್ ಪುತ್ತೂರು ಮಾತನಾಡಿ ನೇರಳಕಟ್ಟೆಯಲ್ಲಿ ಈ ಹಿಂದೆ ರೈಲು ನಿಲುಗಡೆಯಾಗುತ್ತಿತ್ತು. ಇದೀಗ ಮೀಟರ್ಗೇಜ್ನಿಂದ ಬ್ರಾಡ್ಗೇಜ್ ಪರಿವರ್ತನೆಯಾದ ಬಳಿಕ ಇಲ್ಲಿ ಗೂಡ್ಸ್ ಹಾಗೂ ಪ್ರಯಾಣಿಕ ರೈಲುಗಳ ಕ್ರಾಸಿಂಗ್ಗಾಗಿ ಮಾತ್ರ ಬಳಸಲ್ಪಡುತ್ತಿದೆ. ಪ್ಯಾಸೆಂಜರ್ ರೈಲು ನಿಲುಗಡೆ ಇಲ್ಲದ ಕಾರಣ ನೇರಳಕಟ್ಟೆ [...](Visited 8 times, 8 visits today)
↧